ಹುಬ್ಬಳ್ಳಿ: ವ್ಯಕ್ತಿಯೋರ್ವನ ಮೇಲೆ ಕೊಲೆಗೆ ಸಂಚು ರೂಪಿಸಿದ ಆರು ಜನ ಆರೋಪಿಗಳನ್ನು ಹಳೇ ಹುಬ್ಬಳ್ಳಿ ಠಾಣೆಯ ಪೊಲೀಸರು ಬಂಧನ ಮಾಡಿದ್ದು, ಕೃತ್ಯಕ್ಕೆ ಬಳಿಸಿದ ವಾಹನ ಹಾಗೂ ಮಾರಕಾಸ್ತ್ರಗಳನ್ನು ಗುರುವಾರ ವಶಪಡಿಸಿಕೊಂಡಿದ್ದಾರೆ.
ಕಳೆದ ಹಲವು ದಿನಗಳಿಂದ ಹಳೇ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢರ ಮಠದ ಬಳಿ ಗಣೇಶ್ ಅನ್ನೋ ವ್ಯಕ್ತಿಯು ಬೇರೊಬ್ಬರ ಜೊತೆ ಜಗಳವಾಡುತಿದ್ದ ಸಂದರ್ಭದಲ್ಲಿ ಅಲ್ಲೇ ಇದ್ದ ದೀಪಕ್ ಅನ್ನೋ ವ್ಯಕ್ತಿ ಜಗಳ ಬಿಡಿಸಲು ಮುಂದಾಗಿದ್ದಾನೆ. ಆಗ ಗಣೇಶ್ ದೀಪಕ್ ಮೇಲೆ ಅವ್ವಾಜ ಹಾಕಿ \” ನಿಂದ್ ಬಾಳ್ ಆಗೇತಿ ನೋಡ್ಕೋತೀನಿ \” ಅಂತ ಹೇಳಿದ್ದಾನೆ. ಇದಕ್ಕೆ ದೀಪಕ್ ಗಣೇಶನಿಗೆ ಹೊಡೆದಿದ್ದಾನ್ ಅಂತೆ. ಇದನ್ನೇ ನೆಪವಾಗಿಟ್ಟುಕೊಂಡು ಗಣೇಶ್, ದೀಪಕ್ ನ್ ಕೊಲೆಗೆ ಸಂಚು ರೂಪಿಸಿ ಮಂಜುನಾಥ ಪಂಚ್ಯಾಣ, ಪವನ್ ಗಬ್ಬೂರ, ವಿನಾಯಕ ದುಂಡಿ, ನಾಗರಾಜ್ ಮಿರಜಕರ್, ರಾಜಪ್ಪ ಹನುಮನಹಳ್ಳಿ, ಸೂಹಾನ್ ವಜ್ಜಣ್ಣವರ ಎಂಬಾತರನ್ನು ಸೇರಿಸಿಕೊಂಡು ಸಿದ್ದಾರೂಢ ಮಠದ ದ್ವಾರ ಬಾಗಿಲು ಕಡೆ ಇರುವ ಆಫೀಸ್ ಹತ್ತಿರ ಅಟ್ಯಾಕ್ ಮಾಡಿದ್ದಾರೆ. ಅದೃಷ್ಟವಶಾತ್ ದೀಪಕ್ ಪಾರಾಗಿದ್ದಾನೆ. ಈ ಘಟನೆ ಕುರಿತು ಹಳೇ ಹುಬ್ಬಳ್ಳಿ ಪೋಲಿಸರಿಗೆ ಮಾಹಿತಿ ನೀಡಿದ್ದಾನೆ.
ಪ್ರಕರಣ ದಾಖಲಿಸಿಕೊಂಡ ಹಳೇ ಹುಬ್ಬಳ್ಳಿ ಪೊಲೀಸರು ಕೆಲವೇ ಘಂಟೆಗಳಲ್ಲಿ ಆರು ಜನ ಆರೋಪಿಗಳನ್ನು ಬಂಧಿಸಿದ್ದಾರೆ, ಆದರೆ ಪ್ರಮುಖ ಆರೋಪಿ ಗಣೇಶ್ ಬಿಲಾನ್ ಅಂಬಾತ್ ತಲೆ ಮರೆಸಿಕೊಂಡಿದ್ದಾನೆ.
ಇನ್ನು ಕೊಲೆಗೆ ಸಂಚು ರೂಪಿಸಿ ಕೃತ್ಯಕ್ಕೆ ಬಳಸಿದ 1 ಆಟೋರಿಕ್ಷಾ, 2 ಮೋಟಾರ್ ಬೈಕ್, 2 ತಲವಾರ ಹಾಗೂ 2 ಚಾಕುಗಳನ್ನು ವಶಪಡಿಸಿಕೊಳ್ಳುವ ಮೂಲಕ ಆರೋಪಿಗಳನ್ನು ಶಸ್ತ್ರಾಸ್ತ್ರ ಕಾಯ್ದೆಯಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಮೂಲಕ ಪ್ರಕರಣವನ್ನು ಬೇಧಿಸಿದ್ದಾರೆ.
ಪ್ರಕರಣ ಕಾರ್ಯಾಚರಣೆಯಲ್ಲಿ ಭಾಗವಹಿಸಿ ಆರೋಪಿತರನ್ನು ಪತ್ತೆ ಮಾಡಿದ ಹಳೇ ಹುಬ್ಬಳ್ಳಿ ಠಾಣೆಯ ಪೊಲೀಸ್ ಸಿಬ್ಬಂದಿಗಳ ಕಾರ್ಯವೈಖರಿಯನ್ನು ಆಯುಕ್ತರು ಶ್ಲಾಘಸಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.