ಹುಬ್ಬಳ್ಳಿ: ಬಿಗ್ ಬಾಸ್ ಖ್ಯಾತಿಯ ಸಮೀರ್ ಆಚಾರ್ಯ ತನ್ನ ತಂದೆ-ತಾಯಿಯ ಜೊತೆ ಸೇರಿಕೊಂಡು ತನ್ನ ಪತ್ನಿಗೆ ಮನಬಂದಂತೆ ಹಲ್ಲೆ ಮಾಡಿದ್ದಾರೆಂಬ ಘಟನೆ ನಡೆದಿದೆ.
ಇಂದು ಎಂದಿನಂತೆ ಮನೆಯಲ್ಲಿ ಕೆಲಸ ಮಾಡುತಿದ್ದ ಸಂದರ್ಭದಲ್ಲಿ ಶ್ರಾವಣಿ ಆಚಾರ್ಯ ತನ್ನ ಮಗಳು ಅಳುತ್ತಿದ್ದ ಕಾರಣಕ್ಕೆ ಬೇದರಿಸಿದ್ದಾರೆ. ಇದಕ್ಕೆ ಕೋಪಗೊಂಡ ಸಮೀರ್ ಆಚಾರ್ಯ ಅವರ ತಂದೆ ಸೊಸೆ ಶ್ರಾವಣಿಗೆ ಬೈದಿದ್ದಾರೆ. ಇದೇ ವಿಷಯಕ್ಕೆ ಮಾತಿಗೆ ಮಾತು ಬೆಳೆದು ಜಗಳ ದೀರ್ಘಕ್ಕೆ ಹೋಗಿದೆ.

ನಂತರ ಗಂಡ ಸಮೀರ್ ಸೇರಿದಂತೆ ಅವರ ಅತ್ತೆ, ಮಾವ ಸೇರಿಕೊಂಡು ಸೊಸೆಗೆ ಮನಬಂದಂತೆ ಹಲ್ಲೆ ಮಾಡಿದ್ದಾರೆ. ಈ ವೇಳೆ ಇನ್ಸ್ಟಾಗ್ರಾಂನಲ್ಲಿ ಲೈವ್ ಹೋಗಿದ್ದ ಶ್ರಾವಣಿ ಫೋನ್ ಕೂಡ ಒಡೆದು ಹಾಕಿದ್ದಾರಂತೆ. ಈ ಗಲಾಟೆ ವೇಳೆ ಶ್ರಾವಣಿ ಅವರಿಗೆ ಕೈ ಹಾಗೂ ಮುಖಕ್ಕೆ ಗಾಯಗಳಾಗಿವೆ.
ಈ ಗಲಾಟೆಯಲ್ಲಿ ಸಮೀರ್ ಆಚಾರ್ಯ ತಂದೆಯ ಕೂಡ ತಲೆ ಬಾಗಕ್ಕೆ ಗಾಯಗಳಾಗಿವೆ. ಸದ್ಯ ಶ್ರಾವಣಿ ನ್ಯಾಯಕ್ಕಾಗಿ ಹುಬ್ಬಳಿಯ ಮಹಿಳಾ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ. ಮತ್ತೊಂದೆಡೆ ಸಮೀರ್ ಆಚಾರ್ಯ ತಂದೆ, ಸೊಸೆ ಮೇಲೆ ದೂರು ನೀಡಲು ಮುಂದಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.