By using this site, you agree to the Privacy Policy and Terms of Use.
Accept
Karnataka Public VoiceKarnataka Public VoiceKarnataka Public Voice
Notification Show More
Font ResizerAa
  • Home
    • Home 2
    • Home 3
    • Home 4
    • Home 5
  • U.K News
    U.K News
    Politics is the art of looking for trouble, finding it everywhere, diagnosing it incorrectly and applying the wrong remedies.
    Show More
    Top News
    Latest News
  • Technology
    TechnologyShow More
  • Posts
    • Post Layouts
    • Gallery Layouts
    • Video Layouts
    • Audio Layouts
    • Post Sidebar
    • Review
      • User Rating
    • Content Features
    • Table of Contents
  • Pages
    • Blog Index
    • Contact US
    • Search Page
    • 404 Page
    • Customize Interests
    • My Bookmarks
  • Join Us
Reading: ತಿಮ್ಮಪ್ಪನ ದರ್ಶನಕ್ಕೆ ತೆರಳಿದ್ದ ಮೂರು ಜನ ಸ್ನೇಹಿತರ ಮಿಸ್ಸಿಂಗ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್…!
Font ResizerAa
Karnataka Public VoiceKarnataka Public Voice
  • ES Money
  • U.K News
  • The Escapist
  • Entertainment
  • Science
  • Technology
  • Insider
  • Home
    • Home News
    • Home 2
    • Home 3
    • Home 4
    • Home 5
  • Categories
    • Technology
    • Entertainment
    • The Escapist
    • Insider
    • ES Money
    • U.K News
    • Science
    • Health
  • Bookmarks
    • Customize Interests
    • My Bookmarks
  • More Foxiz
    • Blog Index
    • Sitemap
Have an existing account? Sign In
Follow US
Breaking NewsCrime newsHubli Dharwad Policeಅಪರಾಧ

ತಿಮ್ಮಪ್ಪನ ದರ್ಶನಕ್ಕೆ ತೆರಳಿದ್ದ ಮೂರು ಜನ ಸ್ನೇಹಿತರ ಮಿಸ್ಸಿಂಗ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್…!

ADMIN
Last updated: November 20, 2024 11:39 am
ADMIN Published October 6, 2024

ಹುಬ್ಬಳ್ಳಿ: ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗಿದ್ದ ಮೂವರು ಸ್ನೇಹಿತರ ಗುಂಪಿನಲ್ಲಿ ಓರ್ವ ಕಾಣೆಯಾಗಿ, ಇಬ್ಬರು ವಾಪಾಸಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಸ್ಟ್ ಸಿಕ್ಕಿದ್ದು, ಸದ್ಯ ಕಾಣೆಯಾಗಿದ್ದ ಹನುಮಂತ ಶನಿವಾರ ರಾತ್ರಿ ತಮ್ಮ ನಿವಾಸಕ್ಕೆ ವಾಪಾಸ್ ಆಗಿದ್ದಾನೆಂಬ ಸಂಗತಿ ತಿಳಿದುಬಂದಿದೆ.

ಸೆ.22 ರಂದು ಹಳೇಹುಬ್ಬಳ್ಳಿಯ ಜಂಗ್ಲಿಪೇಟೆಯ ವಡ್ಡರ ಓಣಿಯ ನಿವಾಸಿಗಳಾದ ಹನುಮಂತ ಮಂಜಲಕರ (31) ತನ್ನ ಸ್ನೇಹಿತರಾದ ಶಿವಾಜಿ ಮಣ್ಣವಡ್ಡರ, ಗಣೇಶ ಬೆಡಸೂರ ಜೊತೆಗೂಡಿ ತಿರುಪತಿಗೆ ಹೋಗಿದ್ದರು. ಆದರೆ ಸೆ.27 ರಂದು ಮೂರು ಜನರಲ್ಲಿ ಶಿವಾಜಿ ಮತ್ತು ಗಣೇಶ ಮಾತ್ರ ವಾಪಾಸ್ ಬಂದಿದ್ದರು.

\"\"

ಈ ವೇಳೆ ಹನುಮಂತ ಕಾಣೆಯಾಗಿರುವ ಕುರಿತು ಶಿವಾಜಿ ಮತ್ತು ಗಣೇಶ ತಿಳಿಸಿದ್ದರು. ಇದರಿಂದ ಗಾಬರಿಗೊಂಡ ಹನುಮಂತನ ಕುಟುಂಬಸ್ಥರು ಸೆ.27 ರಂದು ಶಿವಾಜಿ ಮಣ್ಣವಡ್ಡರ ಎಂಬಾತನಿಗೆ ಹನುಮಂತನನ್ನು ಕರೆದುಕೊಂಡು ಬರುವಂತೆ ಒತ್ತಾಯಿಸಿದ್ದಾರೆ.

ಇದರಿಂದ ಗಾಬರಿಗೊಂಡಿದ್ದ ಶಿವಾಜಿ ಏಕಾಏಕಿ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದನು. ಇದರಿಂದ ತಿರುಪತಿ ಪ್ರವಾಸಕ್ಕೆ ಹೋಗಿದ್ದ ಪ್ರಕರಣ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು.

\"\"

ಇತ್ತ ಶಿವಾಜಿ ಏಕಾಏಕಿ ಆತ್ಮಹತ್ಯೆ ಮಾಡಿಕೊಂಡಿದ್ದು, ಮತ್ತೊಂದೆಡೆ ಹನುಮಂತ ಕಾಣೆಯಾಗಿದ್ದು ಇವೆಲ್ಲವನ್ನೂ ನೋಡಿ ಹನುಮಂತ ಮೃತಪಟ್ಟಿದ್ದಾನಾ? ಅಥವಾ ಕಾಣೆಯಾಗಿದ್ದಾನಾ? ಎಂಬ ಸಾಕಷ್ಟು ಪ್ರಶ್ನೆಗಳು ಕಾಡಿದ್ದವು.

ಈ ನಡುವೆ ಹನುಮಂತ ಮಂಜಲಕರ ಅವರ ಕುಟುಂಬಸ್ಥರು ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ನಾಪತ್ತೆಯ ಪ್ರಕರಣವನ್ನು ದಾಖಲಿಸಿದ್ದರು.

ಸದ್ಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕಸಬಾಪೇಟೆ ಪೊಲೀಸರು ತನಿಖೆ ಚುರುಕುಗೊಳಿದ್ದರು. ಈ ನಡುವೆ ಹನುಮಂತ ಮಂಜಲಕರ ಶನಿವಾರ ರಾತ್ರಿ ವಾಪಾಸ್ ನಿವಾಸಕ್ಕೆ ಆಗಮಿಸಿದ್ದಾನೆಂದು ತಿಳಿದುಬಂದಿದೆ.

ಇನ್ನು ರಕ್ತಸಂಬಂಧಕ್ಕಿಂತ ಹೆಚ್ಚು ಇದ್ದ ಸ್ನೇಹಿತರ ಬದುಕಿನಲ್ಲಿ ತಿರುಪತಿ ಪ್ರವಾಸ ಬಿರುಗಾಳಿ ಎಬ್ಬಿಸಿದ್ದು, ಶಿವಾಜಿ ತನ್ನದಲ್ಲದ ತಪ್ಪಿಗೆ ಜೀವವನ್ನೇ ಕಳೆದುಕೊಂಡಿದ್ದಾನೆ. ಮತ್ತೊಂದೆಡೆ ಹನುಮಂತ ವಾಪಾಸ್ ಮನೆಗೆ ಬಂದಿದ್ದು, ಪೊಲೀಸರು ಈ ಬಗ್ಗೆ ಇನ್ನಷ್ಟು ತನಿಖೆ ನಡೆಸಿ ಮಾಹಿತಿ ನೀಡಬೇಕಿದೆ.

[ruby_related total=5 layout=5]

[Ruby_E_Template id="1714"]
© Foxiz News Network. Ruby Design Company. All Rights Reserved.
Welcome Back!

Sign in to your account