ಹುಬ್ಬಳ್ಳಿ: ದಕ್ಷಿಣ ಉಪವಿಭಾಗದ ಒಟ್ಟು 14 ಪ್ರತ್ಯೇಕ ಸ್ಥಳಗಲ್ಲಿ ಚೆಕ್ ಪೋಸ್ಟ್ ಹಾಕಿ, ಸುಮಾರು 264 ಅಗತ್ಯ ಮತ್ತು ಸೂಕ್ತ ದಾಖಲಾತಿ ಇಲ್ಲದ ದ್ವಿಚಕ್ರ ವಾಹನಗಳನ್ನು ಹಾಗೂ ಮೂರು ಆಟೋಗಳನ್ನು ಸೀಜ್ ಮಾಡಲಾಗಿದೆ ಎಂದು ಹು-ಧಾ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಹೇಳಿದ್ದಾರೆ.
ನಿನ್ನೆ ನಗರದಲ್ಲಿ ಸಿಟಿ ರೌಂಡ್ ವೇಳೆ ಸೀಜ್ ಆದ ವಾಹನಗಳ ವೀಕ್ಷಣೆ ಮಾಡಿದ ಬಳಿಕ ಮಾತನಾಡಿದ ಅವರು, ಹುಬ್ಬಳ್ಳಿ-ಧಾರವಾಡ ಮಹಾನಗರ ಕಮಿಷ್ನರೇಟ್ ವ್ಯಾಪ್ತಿಯ ದಕ್ಷಿಣ ಉಪವಿಭಾಗದ 5 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ಮಾಡಲಾಗಿದೆ. ಹುಬ್ಬಳ್ಳಿ ಟೌನ್, ಘಂಟಿಕೇರಿ, ಕಸಬಾಪೇಟ್, ಹಳೇ ಹುಬ್ಬಳ್ಳಿ, ಬೆಂಡಿಗೇರಿ ಪೊಲೀಸ್ ಠಾಣೆಗಳಲ್ಲಿ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಒಟ್ಟು 5 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದ ಬಗ್ಗೆ ದೂರು ಬಂದಿತ್ತು. ಅತೀ ವೇಗ, ಸಂಚಾರಿ ನಿಯಮ ಉಲ್ಲಂಘನೆ, ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡುವ ಬಗ್ಗೆ ದೂರು ಬಂದಿತ್ತು. ನಿನ್ನೆ ದಕ್ಷಿಣ ಉಪವಿಭಾಗದ ಒಟ್ಟು 14 ಪ್ರತ್ಯೇಕ ಸ್ಥಳಗಲ್ಲಿ ಚೆಕ್ ಪೋಸ್ಟ್ ಹಾಕಲಾಗಿತ್ತು. ಸುಮಾರು 264 ಅಗತ್ಯ ಮತ್ತು ಸೂಕ್ತ ದಾಖಲಾತಿ ಇಲ್ಲದ ವಾಹನಗಳನ್ನು ಸೀಜ್ ಮಾಡಲಾಗಿದೆ. ಮುಖ್ಯವಾಗಿ ನಂಬರ್ ಪ್ಲೇಟ್ ಇಲ್ಲದೇ ಇರುವ ವಾಹನಗಳು ಸಾಕಷ್ಟಿವೆ. ಐ ಎಂ ಇ ಕಾಯ್ದೆಯಲ್ಲೂ ಎಫೆಕ್ಟ್ ಆಗುತ್ತೆ.
ದಾಖಲಾತಿ ನೀಡಿದವರನ್ನು ಹೊರತು ಪಡಿಸಿ, ಉಳಿದ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಚೈನ್ ಸ್ನಾಚಿಂಗ್, ದರೋಡೆ, ಕೊಲೆ ಪ್ರಯತ್ನ, ಕಳ್ಳತನ ಸೇರಿ ಹಲವು ಪ್ರಕರಣಗಳಲ್ಲಿ ವಾಹನಗಳು ಉಪಯೋಗಿಸಲಾಗುತ್ತದೆ ಎಂದರು. ಹೆಣ್ಣುಮಕ್ಕಳಿರುವ ಸ್ಥಳಗಲ್ಲಿ ಕಿರಿಕಿರಿ ನೀಡೋದಕ್ಕೆ ಬಳಸಲಾಗುತ್ತೆ.
ವಶಕ್ಕೆ ಪಡೆದ ವಾಹನಗಳ ಮೇಲೆ ಪ್ರಕರಣ ಸಹ ದಾಖಲು ಮಾಡಲಾಗುತ್ತಿದೆ. ನಿಯಮಾವಳಿ ಪ್ರಕಾರವೇ ಅದನ್ನ ಬಿಡಿಸಿಕೊಳ್ಳಬಹುದು. ನಿನ್ನೆ ಮೊದಲ ಹಂತದ ಕಾರ್ಯಾಚರಣೆ ಮಾಡಲಾಗಿದೆ. ಸರಿಯಾದ ದಾಖಲಾತಿ ಇಟ್ಟುಕೊಳ್ಳಿ ಅಂತ ಸಾರ್ವಜನಿಕರಿಗೆ ಮನವಿ ಮಾಡ್ತೇನೆ. ಡಿಜಿ ಲಾಕರ್ ನಲ್ಲೂ ನಮಗೆ ತೋರಿಸಲು ಅವಕಾಶ ಇದೆ ಎಂದರು.
ದೀಪಾವಳಿ ಹಬ್ಬದ ಹಿನ್ನೆಲೆ ಹೆಣ್ಣುಮಕ್ಕಳು ಹಲವಡೆ ಹೋಗುವ ಸಾಧ್ಯತೆ ಇದೆ. ಮಹಿಳಾ ಸುರಕ್ಷತೆ, ವಿದ್ಯಾರ್ಥಿಗಳ ಸುರಕ್ಷತೆ ಗಮನದಲ್ಲಿಟ್ಟುಕೊಂಡು ಕಾರ್ಯಾಚರಣೆ ಮಾಡಲಾಗಿದೆ. ಈಗಾಗಲೇ ನಾವು ಏರಿಯಾ ಡಾಮಿನೆಷನ್ ಕೂಡ ಮಾಡಿದ್ದೇವೆ. ಈ ಕಾರ್ಯಾಚರಣೆ ಸಬ್ ಡಿವಿಷನ್ ಹಂತದಲ್ಲಿರುತ್ತೆ.
ಎಸಿಪಿ ಸೇರಿ ಎಲ್ಲಾ ಇನ್ಸ್ಪೆಕ್ಟರ್ ಚೆಕ್ ಪೋಸ್ಟ್ ಹಾಕಿ ಕಾರ್ಯಾಚರಣೆ ಮಾಡಲಾಗುತ್ತೆ. ನಾವು ಪ್ರಕರಣ ದಾಖಲು ಮಾಡಿಕೊಂಡರೆ ವಾಹನ ಮಾಲೀಕರಿಗೆ ಸಮಸ್ಯೆ ಆಗುತ್ತೆ.ಈ ಕಾರ್ಯಾಚರಣೆ ಮುಂದುವೆರೆಯುತ್ತೆ. ಮೈನರ್ ಮಕ್ಕಳಿಗೆ ವಾಹನವನ್ನು ಕೊಡಬೇಡಿ.
ಮುಂಜಾಗ್ರತಾ ಕ್ರಮವನ್ನು ಸಾರ್ವಜನಿಕರು ವಹಿಸಬೇಕು.ಹಂತ ಹಂತವಾಗಿ ಕಾರ್ಯಾಚರಣೆ ಮಾಡ್ತಾ ಇದ್ದಿವಿ. ಈಗಾಗಲೇ ಮೂರು ಆಟೋ ಗಳನ್ನು ಸಹ ಸೀಜ್ ಮಾಡಿದ್ದೇವೆ. ನಾಲ್ಕು ಚಕ್ರ ವಾಹನಗಳನ್ನು ಅಪಹರಣಕ್ಕೆ, ಕಳ್ಳತನದ ವಸ್ತುಗಳ ಸಾಗಾಟಕ್ಕೆ ಸೇರಿ ಹಲವು ಅಪರಾಧ ಕೃತ್ಯಗಳಲ್ಲಿ ಬಳಸಲಾಗುತ್ತೆ. ಯಾವಾಗ ಯಾವಾಗ ಇಂತಹ ಕಾರ್ಯಚರಣೆ ಮಾಡ್ತೇವೆ ಅಂತ ನಮ್ಮ ಅಧಿಕಾರಿಗಳಿಗೆ ತಿಳಿಸಲಾಗುತ್ತದೆ ಎಂದರು.