ಹುಬ್ಬಳ್ಳಿ: ಮೀಟರ್ ಬಡ್ಡಿ ಕಿರುಕುಳಕ್ಕೆ ವ್ಯಕ್ತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಆಯುಕ್ತ ಎನ್.ಶಶಿಕುಮಾರ ಪ್ರತಿಕ್ರಿಯೆ ನೀಡಿ ಸಿದ್ಧಪ್ಪ ಕೆಂಚಣ್ಣವರ್ ಎಂಬ ವ್ಯಕ್ತಿ ಸಾಲದ ವಿಚಾರವಾಗಿ ಆತಹತ್ಯೆ ಮಾಡಿಕೊಂಡಿದ್ದಾನೆ, ನಿನ್ನೆ ರಾತ್ರಿ ಡೆತ್ ನೋಟ್ ಬರೆದು ಸ್ಟೇಟಸ್ ಇಟ್ಟುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದಾನೆ.
ಹಲವು ವರ್ಷಗಳ ಹಿಂದೆ ಮಹೇಶ್ ಚಿಕ್ಕವೀರಮಠ್ ಎಂಬುವವನಿಂದ 10 ಲಕ್ಷ ಸಾಲ ಪಡೆದುಕೊಂಡಿದ್ದ ಎಂಬ ಮಾಹಿತಿ ಇದೆ, ಬಡ್ಡಿ ಹಣ ನೀಡುವಂತೆ ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಮಾಡಲಾಗಿದೆ.
ಬಡ್ಡಿ ವಿಚಾರವಾಗಿ ಮನನೊಂದು ನಿನ್ನೆ ರಾತ್ರಿ ಸಿದ್ಧಪ್ಪ ಟ್ರಕ್ ಕೆಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ, ಈ ಕುರಿತು ಮೃತ ಸಿದ್ಧಪ್ಪನ ಕುಟುಂಬಸ್ಥರಿಂದಲೂ ಆರೋಪ ಮಾಡಲಾಗಿದೆ. ಸಾಲ ಪಡೆದಿದ್ದ ವಿಚಾರವಾಗಿಯೂ ಸಹ ಸಿದ್ದಪ್ಪ ಅವರ ಕುಟುಂಬಸ್ಥರಿಗೆ ತಿಳಿಸಿರಲಿಲ್ಲವಂತೆ.
ಈಗಾಗಲೇ ನಾವು ಆರೋಪಿ ಮಹೇಶ ನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದೇವೆ, ಸಾಲ ಹಾಗೂ ಬಡ್ಡಿ ವಿಚಾರವಾಗಿ ಸಮಗ್ರ ತನಿಖೆ ನಡೆಸಲಾಗುವುದು, ತಪ್ಪಿತಸ್ಥನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.