ಹುಬ್ಬಳ್ಳಿ: ಮಹಿಳೆ ಜೊತೆ ಅನುಚಿತ ವರ್ತನೆ ಮಾಡಿದ
ವ್ಯಕ್ತಿಯೊಬ್ಬನನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹು-ಧಾ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಹೇಳಿದರು.

ನಗರದ ಕಸಬಾಪೇಟೆ ಪೊಲೀಸ್ ಠಾಣೆಗೆ ಭೇಟಿ ನೀಡಿ ಮಾತನಾಡಿದ ಅವರು, ವಿವಾಹಿತ ಮಹಿಳೆ ಜೊತೆಗೆ ಮಾತನಾಡಿದ್ದಕ್ಕೆ ನಿನ್ನೆ ಹುಬ್ಬಳ್ಳಿಯ ಟಿಪ್ಪು ನಗರದಲ್ಲಿ ಮುಜಾಫೀರ್ ಕಲಬುರ್ಗಿ ಎನ್ನುವ ಯುವಕನನ್ನು ಕೆಲಸ ಮಾಡುವ ಜಾಗದಿಂದ ಅಪಹರಿಸಿಕೊಂಡು ಹೋಗಿ ವಿವಸ್ತ್ರಗೊಳಿಸಿ ಹಲ್ಲೆ ಮಾಡಲಾಗಿತ್ತು. ಈ ಕುರಿತಂತೆ ಕೊಲೆ ಪ್ರಯತ್ನ, ಮಹಿಳೆ ಜೊತೆ ಅನುಚಿತ ವರ್ತನೆ ಹಿನ್ನೆಲೆಯಲ್ಲಿ
9 ಜನರನ್ನ ವಶಕ್ಕೆ ಪಡೆಯಲಾಗಿದೆ.
ಬಂಧಿತರು ಮಹ್ಮದ್ ಅಲಿ, ಮಲ್ಲಿಕ್, ಮಾಬುಬ್ ಅಲಿ, ಇಸ್ಮಾಯಿಲ್, ನದೀಮ್, ಖಾಜಾಮೈನುದ್ದಿನ್, ಎಂಡಿ ಸಾದೀಕ್, ಜುಬೇರ್, ಎಂಡಿ ಇರ್ಫಾನ್ ಎನ್ನುವವರ ಬಂಧಿಸಲಾಗಿದೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ ಒಂದು ಆಟೋ, ಎರಡು ಬೈಕ್ ವಶಕ್ಕೆ ಪಡೆಯಲಾಗಿದೆ.

ಮಹಿಳೆ ಜೊತೆ ಅನುಚಿತ ವರ್ತನೆ ಹಿನ್ನಲೆ ಹಲ್ಲೆಗೊಳಗಾದ ಮುಜಾಫೀರ್ ನನ್ನು ಕೂಡ ಬಂಧಿಸಲಾಗಿದ್ದು, ಎರಡು ಕಡೆ ದೂರು ಪ್ರತಿದೂರು ದಾಖಲಾದ ಹಿನ್ನಲೆ ಮುಜಾಫೀರ್ ಕೂಡಾ ವಶಕ್ಕೆ ಪಡೆದು ತನಿಖೆ ಕೈಗೊಳ್ಳಲಾಗಿದೆ ಎಂದರು.